ನವದೆಹಲಿ : ಮಂಗಳವಾರ ಪ್ರಧಾನಿ ನರೇಂದ್ರ ಮೋದಿ ಅವರು ಮಾಜಿ ಪ್ರಧಾನಿ ಮನಮೋಹನ್ ಸಿಂಗ್ ಮತ್ತು ಅಸ್ಸಾಂನ ಕಾಂಗ್ರೆಸ್ ಸರ್ಕಾರದ ಮೇಲೆ ವಾಗ್ದಾಳಿ ನಡೆಸಿ, ಸೋನಿಯಾ ನೇತೃತ್ವದ ಕಾಂಗ್ರೆಸ್ ಸರ್ಕಾರ 15 ವರ್ಷಗಳಲ್ಲಿ ಮಾಡಲಾಗದನ್ನು ಅವರು ನಮ್ಮಿಂದ 15 ತಿಂಗಳಿನಲ್ಲು ಬಯಸುತ್ತಾರೆ ಎಂದರು.
ಕೊಕ್ರಝಾರ್ ಪ್ರದೇಶದಲ್ಲಿ ಸಭೆಯೊದರಲ್ಲಿ ಮಾತನಾಡಿದ ಪ್ರಧಾನಿ ನರೇಂದ್ರ ಮೋದಿ ಅವರು, ಮಾಜಿ ಪ್ರಧಾನಿ ಮನಮೋಹನ್ ಸಿಂಗ್ ಇಲ್ಲಿಂದಲೇ ರಾಜ್ಯಸಭೆಗೆ ಆಯ್ಕೆಯಾದ್ದರಿಂದ ಈಶಾನ್ಯ ಭಾರತದಲ್ಲಿ ಯಾವುದೇ ಸಮಸ್ಯೆಗಳಿರುವುದಿಲ್ಲ ಎಂದು ನಾನು ತಿಳಿದುಕೊಂಡಿದ್ದೆ. ಜೊತೆಗೆ ಕಾಂಗ್ರೆಸ್ ಸರ್ಕಾರವೇ ಕಳೆದ 15 ವರ್ಷಗಳಿಂದ ಆಡಳಿತದಲ್ಲಿದೆ.ಇಲ್ಲಿಂದ ಆಯ್ಕೆ ಆದ ವ್ಯಕ್ತಿ ಪ್ರಧಾನಿಯಾಗಿ 10 ವರ್ಷಗಳ ಕಾಲ ಆಡಳಿತ ನಡೆಸಿದ್ದಾರೆ ಎಂದರು. ಅವರು ೧೫ ವರ್ಷಗಳ ಕಾಲ ಕೆಲಸ ಮಾಡಲಿಲ್ಲ, ಆದರೆ ನಮ್ಮಿಂದ 15 ತಿಂಗಳಲ್ಲಿ ಎಲ್ಲಾ ಕೆಲಸ ಬಯಸುತ್ತಾರೆ ಎಂದು ವಾಗ್ದಾಳಿ ನಡೆಸಿದರು.
ಈ ವರ್ಷ ಅಸ್ಸಾಂನ ವಿಧಾನಸಭೆಗ ಚುನಾವಣೆ ನಡೆಯಲಿದೆ. ಮಂಗಳವಾರ ಮಧ್ಯಾಹ್ನ ಪ್ರಧಾನಿ ಮೋದಿ ಅವರು ಗೊವಾಹಾಟಿಯಲ್ಲಿ ಯುವ ಜನತೆಯನ್ನುದ್ದೇಶಿಸಿ ಮಾತನಾಡಲಿದ್ದಾರೆ.
ಇದಕ್ಕೂ ಮೊದಲು ಪ್ರಧಾನಿ ನರೇಂದ್ರ ಮೋದಿ ಅವರು ಸಿಕ್ಕಿಂ ಸಾವಯವ ಹಬ್ಬವನ್ನು ಉದ್ಘಾಟಿಸಿ, ಮೇಳದಲ್ಲಿದ್ದ ಮಳಿಗೆಗಳನ್ನು ವೀಕ್ಷಿಸಿದರು.