ನವದೆಹಲಿ : ದಲಿತರಿಗೆ, ಬುಡಕಟ್ಟು ಜನಾಂಗದವರಿಗೆ ಒದಗಿಸಲಾಗಿರುವ ಮೀಸಲಾತಿಯ ಹಕ್ಕನ್ನು ದೇಶದಲ್ಲಿ ಯಾರು ಕೂಡಾ ಕಿತ್ತುಕೊಳ್ಳಲು ಸಾಧ್ಯವಿಲ್ಲ ಎಂದು ಪ್ರಧಾನಿ ನರೇಂದ್ರ ಹೇಳಿದ್ದಾರೆ. ಪ್ರತಿಪಕ್ಷದವರು ಈ ರೀತಿ ಸುೞು ಸುದ್ದಿ ಹಬ್ಬಿಸುತ್ತಿದ್ದಾರೆ ಎಂದು ಹೇಳಿದರು.
ಸೋಮವಾರ ಬಿ ಆರ್ ಅಂಬೇಡ್ಕರ್ ಅವರ ಸ್ಮಾರಕಕ್ಕಾಗಿ ನಡೆದ ಶಿಲಾನ್ಯಾಸ ಸಮಾರಂಭದಲ್ಲಿ ಮಾತನಾಡಿದ ಪ್ರಧಾನಿ ನರೇಂದ್ರ ಮೋದಿ, ವಾಜಪೇಯಿ ಜೀ ಅವರು ಪ್ರಧಾನಿ ಆದಾಗ ಕೂಡ ಮೀಸಲಾತಿಯನ್ನು ತೆಗೆಯುತ್ತಾರೆ ಎಂದು ಅಪಪ್ರಚಾರ ಮಾಡಿದ್ದರು. ಆದರೆ ಅವರು ಎರಡು ಅವಧಿಗೆ ಪ್ರಧಾನಿಯಾಗಿದ್ದಾರೂ ಅ ರೀತಿ ಏನೂ ಆಗಲಿಲ್ಲ. ಈಗ ಸಹ ಜನರ ದಾರಿ ತಪ್ಪಿಸಲು ಈ ರೀತಿ ಸುದ್ದಿ ಹಬ್ಬಿಸಲಾಗುತ್ತಿದೆ ಎಂದರು.
ಬಿ ಆರ್ ಅಂಬೇಡ್ಕರ್ ಅವರು ಮಾರ್ಟಿನ್ ಲೂಥರ್ ಕಿಂಗ್ ತರಹದ ವಿಶ್ವ ನಾಯಕರು.
ಅಂಬೇಡ್ಕರ್ ಅವರನ್ನು ಕೇವಲ ದಲಿತರ ಉದ್ಧಾರಕ ಎಂದು ಕರೆಯುವುದು ತಪ್ಪು. ಅವರು ಎಲ್ಲಾ ಜನಾಂಗದ ಅನ್ಯಾಯದ ವಿರುದ್ಧ ಧ್ವನಿ ಎತ್ತಿದ್ದರು. ಮಹಿಳೆಯರಿಗೆ ಸಮಾನ ಹಕ್ಕುಗಳ ವಿಷಯ ಬಂದಾಗ, ಮಹಿಳೆಯರಿಗೆ ಸಮಾನ ಹಕ್ಕುಗಳು ದೊರೆಯದೇ ಇದ್ದಲ್ಲಿ, ನಾನು ಸಚಿವ ಸಂಪುಟದ ಭಾಗವಾಗುವುದಿಲ್ಲ’ ಎಂದು ಬಾಬಾಸಾಹೇಬ್ ಸ್ಪಷ್ಟವಾಗಿ ಹೇಳಿದ್ದರು ಎಂದು ಪ್ರಧಾನಿ ಹೇಳಿದರು.