ನವದೆಹಲಿ : ರಾಷ್ಟ್ರಪಿತ ಮಹತ್ಮಾ ಗಾಂಧಿ ಅವರ ಮೊಮ್ಮಗ ಕನುಭಾಯ್ ಗಾಂಧಿ ಅವರಿಗೆ ಸ್ವತಃ ಪ್ರಧಾನಿ ಕರೆ ಮಾಡಿ ಸಮಸ್ಯೆಗೆ ಸ್ಪಂದಿಸುವ ಜತೆಗೆ ಕುಶಲೋಪರಿ ವಿಚಾರಿಸಿದ್ದಾರೆ.
ಪ್ರಸ್ತುತ ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ನೆಲೆಸಿರುವ ಮಹತ್ಮಾ ಗಾಂಧಿ ಅವರ ಮೂರನೇ ಮಗ ರಾಮದಾಸ ಅವರ ಪುತ್ರ ಕ್ನುಭಾಯ್ ಗಾಂಧಿ ಅವರನ್ನು ಕೇಂದ್ರ ಸಾಂಸ್ಕೃತಿಕ ಸಚಿವ ಮಹೇಶ್ ಶರ್ಮಾ ಭೇಟಿ ಮಾಡಿದ್ದಾರೆ. ಶರ್ಮಾ ಅವರು ಸುದೀರ್ಘವಾದ 45 ನಿಮಿಷಗಳ ಕಾಲ ಮಾತುಕತೆ ನಡೆಸಿ, ಸಮಸ್ಯೆಯ ಕುರಿತು ಚರ್ಚೆ ನಡೆಸಿದರು
ಈ ಸಂದರ್ಭದಲ್ಲಿ ಪ್ರಧಾನಿ ನರೇಂದ್ರ ಮೋದಿ ಕರೆ ಮಾಡಿ ಕನುಭಾಯ್ ಗಾಂಧಿ ಅವರ ಆರೋಗ್ಯ ವಿಚಾರಿಸಿ, ಎಲ್ಲಾ ರೀತಿಯ ಸಹಾಯ ಮಾಡುವುದಾಗಿ ಭರವಸೆ ನೀಡಿ, ಈ ಕುರಿತು ಸಂಪೂರ್ಣ ಮಾಹಿತಿ ನೀಡುವಂತೆ ಸಚಿವರಿಗೆ ಸೂಚಿಸಿದ್ದಾರೆ.
ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಕನುಭಾಯ್ ಗಾಂಧಿ, ನನಗೆ ತುಂಬಾ ಸಂತೋಷವಾಗಿದೆ, ಸಚಿವರ ಭೇಟಿ ಹಾಗೂ ಫ್ರಧಾನಿ ಅವರ ಬಳಿ ಮಾತನಾಡಿರುವುದು ನನಗೆ ಸಮಾಧಾನ ತಂದಿದೆ. ನಾನು ಮೋದಿ ಅವರ ಹಳೆಯ ಅಭಿಮಾನಿ. ನಾನು ಹಿಂದೊಮ್ಮೆ ಮಾಡಿದ ಸಹಾಯವನ್ನು ಮೋದಿ ಅವರು ಇಂದಿಗೂ ನೆನಪಿಟ್ಟುಕೊಂಡಿರುವುದು ನನಗೆ ನಂಬಲು ಸಾಧ್ಯವಾಗುತ್ತಿಲ್ಲ ಎಂದು ಸಂತೋಷ ವ್ಯಕ್ತಪಡಿಸಿದರು.
ಕನುಭಾಯ್ ಗಾಂಧಿ, ತಮ್ಮ 17ನೇ ವರ್ಷದಲ್ಲಿ ವ್ಯಾಸಂಗಕ್ಕಾಗಿ ಅಮೆರಿಕಾಕ್ಕೆ ತೆರಳಿ, ಮೆಸ್ಯಾಚುಸೆಟ್ಸ್ ಇನ್ಸಸ್ಟಿಟ್ಯೂಟ್ ಆಫ್ ಟೆಕ್ನಾಲಾಜಿಗೆ ಸೇರಿಕೊಂಡರು. ಮುಂದೆ ನಾಸಾದ ಲ್ಯಾಮಗ್ಲಿ ಸಂಶೋಧನಾ ಕೇಂದ್ರದಲ್ಲಿ ಸೇವೆ ಸಲ್ಲಿಸಿದರು. ಇವರ ಪತ್ನಿ ಶಿವಲಕ್ಷ್ಮಿ ಗಾಂಧಿ ಜೀವರಸಾಯನ ಶಾಸ್ತ್ರದಲ್ಲಿ ಗೌರವ ಡಾಕ್ಟರೇಟ್ ಪದವಿ ಗಳಿಸಿದ್ದು, ಇದೀಗ ಪತಿಯ ಜತೆಗೆ ಆಶ್ರಮದಲ್ಲಿ ನೆಲೆಸಿದ್ದಾರೆ. 2014ರಲ್ಲಿ ದಂಪತಿ ಭಾರತಕ್ಕೆ ಆಗಮಿಸಿದ್ದಾರೆ.