ಭುವನೇಶ್ವರ : ಬಿಹಾರ, ಪಶ್ಚಿಮ ಬಂಗಾಳ, ಅಸ್ಸಾಂ ಹಾಗೂ ಓಡಿಶಾ ರಾಜ್ಯಗಳಲ್ಲಿ ಬಡತನ ನಿವಾರಣೆ ಹಾಗೂ ಉದ್ಯೋಗ ಸೃಷ್ಠಿ ಮಾಡುವುದೇ ಕೇಂದ್ರ ಎನ್.ಡಿ.ಎ ಸರ್ಕಾರದ ಮುಂದಿನ ನಡೆ ಎಂದು ಪ್ರಧಾನಿ ನರೇಂದ್ರ ಮೋದಿ ಭರವಸೆ ನೀಡಿದ್ದಾರೆ.
ಓಡಿಶಾದಲ್ಲಿ ಬಿಜೆಪಿ ರ್ಯಾಲಿಯಲ್ಲಿ ಭಾಗವಹಿಸಿ ಮಾತನಾಡಿದ ಪ್ರಧಾನಿ ನರೇಂದ್ರ ಮೋದಿ, ಭಾರತದ ಪೂರ್ವ ರಾಜ್ಯಗಳು ಆರ್ಥಿಕ ಸ್ವಾವಲಂಬನೆಯಲ್ಲಿ ಹಿಂದೆ ಉಳಿದಿದೆ.ಬಡತನ ಅಧಿಕವಾಗಿದೆ. ಇದರಿಂದಾಗಿ ಯುವಕರು ಉದ್ಯೋಗಕ್ಕಾಗಿ ಪಶ್ಚಿಮ ರಾಜ್ಯಗಳಿಗೆ ವಲಸೆ ಹೋಗುತ್ತಿದ್ದಾರೆ. ಮುಂದಿನ ದಿನಗಳಲ್ಲಿ ರಾಜ್ಯದಲ್ಲಿ ಹೆಚ್ಚಿ ಉದೋಗ ಸೃಷ್ಟಿ ಹಾಗೂ ಉತ್ಪಾದನೆಯಲ್ಲಿ ಸ್ವಾವಲಂಬನೆ ಸಾಧಿಸುವ ನಿಟ್ಟಿನಲ್ಲಿ ನಮ್ಮ ನಡೆಯಿರಿಸುವುದಾಗಿ ತಿಳಿಸಿದರು.
ಹಿಂದಿನ ಸರ್ಕಾರಗಳು ಅವರು ಮಾತ್ರ ದೇಶಕ್ಕೆ ಕೆಲಸ ಮಾಡಬೇಕು, ಅವರು ಮಾತ್ರ ದೇಶವನ್ನು ಪ್ರಗತಿಯತ್ತ ಕೊಂಡೊಯ್ಯಲು ಸಾಧ್ಯ ಎಂದು ನಂಬಿದ್ದರು ಆದರೆ ನಮ್ಮ ಸರ್ಕಾರ, ಸಬ್ ಕ ಸಾಥ್, ಸಬ್ ಕ ವಿಕಾಸ್ ಎಂಬ ಮಾತಿನಲ್ಲಿ ನಂಬಿಕೆಯಿಟ್ಟಿದೆ. ಅಭಿವೃದ್ಧಿಗೆ ಪ್ರತಿ ನಾಗರಿಕನ ಪಾತ್ರ ಮುಖ್ಯವಾದದ್ದು ಎಂದು ತಿಳಿದಿದೆ ಎಂದರು.
ಇಂತಹ ಸುಡುಬಿಸಿಲಿನಲ್ಲಿಯೂ ಸಾಗರೋಪಾದಿಯಲ್ಲಿ ಜನ ಬಂದಿದ್ದೀರಿ, ಅಭೂತಪೂರ್ವವಾದ ಪ್ರೀತಿ ತೋರುತ್ತೀದ್ದೀರಿ. ಜನರಿಂದ ಇಂತಹ ಅಭೂತಪೂರ್ವ ಬೆಂಬಲ ನೋಡಿದ ಮೇಲೆ ದೇಶದ ಜನಕ್ಕಾಗಿ ಇನ್ನೂ ಹೆಚ್ಚು ಕೆಲಸ ಮಾಡಲು ಆಸಕ್ತರಾಗಿದ್ದೇವೆ ಎಂದು ಹೇಳಿದರು.