ನವದೆಹಲಿ : ಕೇಂದ್ರ ಮಾನವ ಸಂಪನ್ಮೂಲ ಅಭಿವೃದ್ಧಿ ಇಲಾಖೆ ಸಚಿವರಾಗಿ ಪ್ರಕಾಶ್ ಜಾವಡೇಕರ್ ಅವರು ಅಧಿಕಾರ ಸ್ವೀಕರಿಸಿದ್ದಾರೆ.
ಪರಿಸರ ಖಾತೆ ರಾಜ್ಯ ಸಚಿವರಾಗಿದ್ದ ಜಾವಡೇಕರ್ ಅವರನ್ನು ಪ್ರಧಾನಿ ನರೇಂದ್ರ ಮೋದಿ ಸಚಿವ ಸಂಪುಟ ಪುನಾರಚನೆ ವೇಳೆಯಲ್ಲಿ ಮಾನವ ಸಂಪನ್ಮೂಲ ಅಭಿವೃದ್ಧಿ ಇಲಾಖೆ ಸಚಿವರನ್ನಾಗಿ ಬಡ್ತಿ ನೀಡಿದ್ದರು.
ಅಧಿಕಾರ ವಹಿಸಿಕೊಂಡ ಬಳಿಕ ಮಾತನಾಡಿದ ಸಚಿವರು, ಎಲ್ಲಾ ಸವಾಲುಗಳನ್ನೂ ಅವಕಾಶಗಳನ್ನಾಗಿ ಪರಿವರ್ತಿಸಲಾಗುವುದು. ನಾವು ಎಲ್ಲಾ ರಾಜ್ಯಗಳ ಜೊತೆಗೂ ಸಹಕರಿಸುತ್ತೇವೆ ಎಂದು ತಿಳಿಸಿದರು.
ಸ್ಮೃತಿ ಇರಾನಿ ವಿವಾದಗಳ ಬಗ್ಗೆ ಕೇಳಲಾದ ಪ್ರಶ್ನೆಗೆ ಉತ್ತರಿಸಿದ ಅವರು, ಒಳ್ಳೆಯ ಕೆಲಸದ ಬಗ್ಗೆ ವರದಿ ಮಾಡುತ್ತಿದ್ದರೆ ವಿವಾದಗಳು ಇರುವುದಿಲ್ಲ ಮಾಧ್ಯಮಗಳಿ ಸಲಹೆ ನೀಡಿದರು.