ಬೆಂಗಳೂರು : 2014-15 ನೇ ಸಾಲಿನಲ್ಲಿ ಸಿಇಟಿ ಮುಖಾಂತರ ಬಿಇ ಪ್ರಥಮ ವರ್ಷದ ಸೀಟುಗಳನ್ನು ನಿಯಮಾನುಸಾರ ಹಂಚಿಕೆ ಮಾಡುವ ಪ್ರಕ್ರಿಯೆ ಪೂರ್ಣಗೊಂಡಿದ್ದು, ಕರ್ನಾಟಕ ಪರೀಕ್ಷಾ ಪ್ರಾಧಿಕಾರವು ಭರ್ತಿಯಾಗದೇ ಉಳಿದ ಸೀಟುಗಳನ್ನು ಸರ್ಕಾರದ ಸೂಚನೆಯಂತೆ ಆಯಾ ಕಾಲೇಜುಗಳಿಗೆ ಹಿಂತಿರುಗಿಸಿದೆ.
ಆಯಾ ಸರ್ಕಾರೀ ಕಾಲೇಜು ಪ್ರಾಂಶುಪಾಲರು 15.08.2014 ಒಳಗೆ ಮೊದಲು ಬಂದವರಿಗೆ ಮೊದಲ ಆದ್ಯತೆ ಮೇಲೆ ಕೂಡಲೇ ಭರ್ತಿ ಮಾಡಿಕೊಳ್ಳಲು ಸೂಚನೆ ನೀಡಲಾಗಿದ್ದು ವಿದ್ಯಾರ್ಥಿಗಳು ಈ ಅವಕಾಶ ಬಳಸಿಕೊಳ್ಳಬಹುದಾಗಿದೆ.
ಅದೇ ರೀತಿ ಡಿಪ್ಲ್ಲೊಮೋ ಲ್ಯಾಟರಲ್ ಎಂಟ್ರಿ ಸೀಟುಗಳ ಬಗ್ಗೆಯೂ ಸಹ ಸಿಇಟಿ ಪ್ರವೇಶ ಪ್ರಕ್ರಿಯೆ ಮುಗಿದಿದ್ದು ಉಳಿದಿರುವ ಸರ್ಕಾರಿ ಕಾಲೇಜು ಸೀಟುಗಳ ಕುರಿತು ವಿಧ್ಯಾರ್ಥಿಗಳು ಸರ್ಕಾರಿ ಕಾಲೇಜು ಪ್ರಾಂಶುಪಾಲರನ್ನು ಸಂಪರ್ಕಿಸಬಹುದು.
ಇದು ಸಂಪೂರ್ಣವಾಗಿ ಮೊದಲು ಬಂದವರಿಗೆ ಮೊದಲ ಆದ್ಯತೆ ಯಾಗಿದ್ದು ವಿಧ್ಯಾರ್ಥಿಗಳು ಅದನ್ನು ಗಮನದಲ್ಲಿಟ್ಟುಕೊಂಡು ಆಗಸ್ಟ್ 15 ರ ಸಂಜೆಯೊಳಗೆ ಪ್ರಯತ್ನಿಸಬಹುದಾಗಿದೆ ಎಂದು ಕರ್ನಾಟಕ ಪರೀಕ್ಷಾ ಪ್ರಾಧಿಕಾರ ತಿಳಿಸಿದೆ.