ನವದೆಹಲಿ : ಭಾರತೀಯ ಮುಸ್ಲಿಮರು ದೇಶಕ್ಕಾಗಿ ಬದುಕುತ್ತಾರೆ, ದೇಶಕ್ಕಾಗಿ ಪ್ರಾಣಕೊಡಲೂ ಸಿದ್ಧರಿರುತ್ತಾರೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ.
ಪ್ರಧಾನಿಯಾದ ಬಳಿಕ ಪ್ರಥಮ ಬಾರಿಗೆ ಮಾಧ್ಯಮವೊಂದಕ್ಕೆ ಸಂದರ್ಶನ ನೀಡಿರುವ ನರೇಂದ್ರ ಮೋದಿ, ಭಾರತದಲ್ಲಿ ಶಾಖೆ ತೆರೆಯುವ ಬಗ್ಗೆ ಅಲ್-ಖೈದಾ ಉಗ್ರ ಸಂಘಟನೆ ಹೇಳಿಕೆ ನೀಡಿರುವುದರ ಬಗ್ಗೆ ಪ್ರತಿಕ್ರಿಯಿಸಿರುವ ಮೋದಿ, ಭಾರತದ ಮುಸ್ಲಿಮರು ತನ್ನ ಆಶಯಕ್ಕೆ ತಕ್ಕಂತ ಕುಣಿಯಲಿದ್ದಾರೆ ಎಂಬುದು ಅಲ್-ಖೈದಾ ಉಗ್ರ ಸಂಘಟನೆಯ ಭ್ರಮೆ ಎಂದು ಮೋದಿ ತೀಕ್ಷ್ಣವಾಗಿ ಪ್ರತಿಕ್ರಿಯಿಸಿದ್ದಾರೆ.
ಭಯೋತ್ಪಾದನೆ ಎಂಬುದು ದೇಶ, ಜನಾಂಗಕ್ಕೆ ವಿರೋಧಿಯಲ್ಲ ಅದು ಮಾನವೀಯತೆಗೆ ವಿರೋಧವಾಗಿರುವುದು ಎಂದು ಅಭಿಪ್ರಾಯಪಟ್ಟಿರುವ ಮೋದಿ, ಭಯೋತ್ಪಾದನೆಯನ್ನು ಮಾನವೀಯತೆ ಹಾಗೂ ಅಮಾನವಿಯತೆ ನಡುವಿನ ಹೋರಾಟವನ್ನಾಗಿಸಬೇಕು ಎಂದು ಹೇಳಿದ್ದಾರೆ.
ಇದೇ ವೇಳೆ ಅಮೆರಿಕಾ ಭೇಟಿ ಬಗ್ಗೆಯೂ ಮಾತನಾಡಿರುವ ಮೋದಿ, ಅಮೆರಿಕಾ ಹಾಗೂ ಭಾರತದ ನಡುವೆ ಸಾಕಷ್ಟು ಸಾಮ್ಯತೆಗಳಿವೆ. ಕಳೆದ ಕೆಲವು ವರ್ಷಗಳಲ್ಲಿ ಉಭಯ ದೇಶಗಳ ನಡುವಿನ ಸಂಬಂಧ ಏರಿಳಿತ ಕಂಡಿದೆ ಎಂದು ಹೇಳಿದ್ದಾರೆ. ಆದರೆ 21ನೇ ಶತಮಾನದಲ್ಲಿ ಉಭಯ ದೇಶಗಳ ನಡುವಿನ ಸಂಬಂಧ ಹೊಸ ಸ್ವರೂಪ ಪಡೆದುಕೊಂಡಿದೆ ಎಂದು ಮೋದಿ ಹೇಳಿದ್ದಾರೆ.
ಫರೀದ್ ಜಕಾರಿಯಾ, ಸೆ.13ರಂದು ಪ್ರಥಮ ಬಾರಿಗೆ ಮೋದಿ ಅವರ ಸಂದರ್ಶನ ನಡೆಸಿದ್ದಾರೆ. ಈ ಸಂದರ್ಶನದ ಪೂರ್ಣಪಾಠ, ಸೆ.21ರಂದು ದೇಶಾದ್ಯಂತ ಪ್ರಸಾರವಾಗಲಿದೆ.