ಕೊಲಂಬೋ : 5 ಜನ ಭಾರತೀಯ ಮೀನುಗಾರರಿಗೆ ಶ್ರೀಲಂಕಾ ಹೈಕೋರ್ಟ್ ಗಲ್ಲುಶಿಕ್ಷೆ ನೀಡಿ ಆದೇಶ ಹೊರಡಿಸಿದೆ.
ಮಾದಕ ವಸ್ತು ಕಳ್ಳಸಾಗಣೆ ಆರೋಪದಡಿ ಬಂಧಿಸಲಾಗಿದ್ದ ತಮಿಳುನಾಡಿನ ಐವರು ಮೀನುಗಾರರಿಗೆ ಶ್ರೀಲಂಕಾದ ಕೊಲಂಬೋ ಹೈಕೋರ್ಟ್ ಗಲ್ಲುಶಿಕ್ಷೆ ನೀಡಿದೆ.
2011ರ ನವೆಂಬರ್ ನಲ್ಲಿ ಮಾದಕ ದೃವ್ಯಗಳ ಕಳ್ಳಸಾಗಣೆ ಆರೋಪಡಿ ಶ್ರೀಲಂಕಾ ನೌಕಾಪಡೆ ಈ ಐವರು ಮೀನುಗಾರರನ್ನು ಬಂಧಿಸಿತ್ತು. ಕಳೆದ ಮೂರು ವರ್ಷಗಳಿಂದ ಶ್ರೀಲಂಕಾ ಜೈಲಿನಲ್ಲಿದ್ದ ಈ ಮೀನುಗಾರರಿಗೆ ಭಾರತದ ರಾಯಭಾರ ಕಛೇರಿಯಿಂದ ಯಾವುದೇ ಸ್ಪಂದನೆ ಸಿಕ್ಕಿರಲಿಲ್ಲ. ಈ ನಿಟ್ಟಿನಲ್ಲಿ ಕೊಲಂಬೋ ಹೈಕೋರ್ಟ್ ನ್ಯಾ.ಪದ್ಮಾ ಮೀನುಗಾರರಿಗೆ ಗಲ್ಲುಶಿಕ್ಷೆ ನೀಡಿ ಆದೇಶ ಹೊರಡಿಸಿದ್ದಾರೆ.
ತೀರ್ಪು ಪ್ರಶ್ನಿಸಿ ಮೀನುಗಾರರು ನ.14ರೊಳಗೆ ಶ್ರೀಲಂಕಾ ಸುಪ್ರೀಂ ಕೋರ್ಟ್ ನಲ್ಲಿ ಮೇಲ್ಮನವಿ ಸಲ್ಲಿಸಲು ಅವಕಾಶವಿದೆ ಎಂದು ನ್ಯಾಯಾಲಯ ತಿಳಿಸಿದೆ. ಈ ಐವರು ಮೀನುಗಾರರು ತಮಿಳುನಾಡಿನ ರಾಮೇಶ್ವರಂ ಮೂಲದವರಾಗಿದ್ದಾರೆ.