ನವದೆಹಲಿ : ಸಂಬಳದಾರರಿಗೆ ಮತ್ತು ಮಧ್ಯಮ ವರ್ಗಕ್ಕೆ ಹೆಚ್ಚಿನ ತೆರಿಗೆ ಹೆಚ್ಚಿಸಿ, ಹೆಚ್ಚಿನ ಹೊರೆಯಾಗಿಸುವುದು ನಮಗೆ ಇಷ್ಟವಿಲ್ಲ, ಬದಲಾಗಿ ತೆರಿಗೆ ವಂಚಿಸುವವರ ಮೇಲೆ ಹೆಚ್ಚಿನ ಹೊರೆಯಾಗುವಂತೆ ಮಾಡಲಿದ್ದೇವೆ. ಇದರಿಂದ ತೆರಿಗೆ ಕಟ್ಟುವವರ ಜೇಬಿನಲ್ಲಿ ಹೆಚ್ಚು ಹಣ ಉಳಿಯುವಂತೆ ಮಾಡಿ, ಅವರು ಅದನ್ನು ವ್ಯಯಿಸಿದಾಗ ಪರೋಕ್ಷ ತೆರಿಗೆಯನ್ನು ಸಂಗ್ರಹಿಸಲು ಅನುವಾಗುತ್ತದೆ ಎಂದು ಕೇಂದ್ರ ವಿತ್ತ ಸಚಿವ ಅರುಣ್ ಜೇಟ್ಲಿ ತಿಳಿಸಿದ್ದಾರೆ.
ಸರ್ಕಾರ ಸಂಗ್ರಹಿಸುವ ಸುಮಾರು ಅರ್ಧದಷ್ಟು ತೆರಿಗೆ ಪರೋಕ್ಷ ತೆರಿಗೆ. ಆಮದು ಸುಂಕ, ಅಬಕಾರಿ ಸುಂಕ ಇತ್ಯಾದಿ ಮಾರ್ಗಗಳಲ್ಲಿ ಇಂದು ತೆರಿಗೆ ಸಂಗ್ರಹವಾಗುತ್ತಿದೆ. ಆದಾಯ ತೆರಿಗೆ ಕುರಿತಂತೆ, ಈಗ ತೆರಿಗೆಯನ್ನು ವಂಚಿಸುವವರನ್ನು ತೆರಿಗೆ ಕಟ್ಟುವಂತೆ ಮಾಡುವುದೇ ತೆರಿಗೆ ಜಾಲವನ್ನು ವಿಸ್ತರಿಸಿದಂತಾಗುತ್ತದೆ ಎಂದು ಹೇಳಿದರು.
ಇಂದು 35 ಸಾವಿರದಿಂದ 40 ಸಾವಿರ ಗಳುಹಿಸುವವನು ಸ್ವಲ ಉಳಿತಾಯ ಮಾಡಿದರೆ ಯಾವ ತೆರಿಗೆಯನ್ನೂ ಕಟ್ಟುವಂತಿಲ್ಲ. ಆದರೆ ಇಂದಿನ ನಿತ್ಯಜೀವನದ ದುಬಾರಿ ವೆಚ್ಚ, ಸಾಗಾಣೆ ವೆಚ್ಚ, ಮಕ್ಕಳ ಶಾಲಾ ಶುಲ್ಕ ಇವುಗಳಿಂದ ಉಳಿತಾಯ ಮಾಡಲು ಸಾಧ್ಯವೇ ಇಲ್ಲ ಎನ್ನುತಾರೆ ಮಧ್ಯಮ ವರ್ಗದ ಜನ ಎಂದರು.
ಆದುದರಿಂದ ತೆರಿಗೆ ಜಾಲವನ್ನು ವಿಸ್ತರಿಸಲು, ತೆರಿಗೆ ವಿನಾಯಿತಿ ಕಡಿಮೆ ಮಾಡಿದರೆ ಪ್ರಯೋಜನವಿಲ್ಲ ಎಂದು ಅಭಿಪ್ರಾಯ ಪಟ್ಟಿರುವ ಜೇಟ್ಲಿ "ಸರ್ಕಾರದ ಖಜಾನೆಯಲ್ಲಿ ಜಾಸ್ತಿ ಹಣವಿದ್ದರೆ, ಈ ವಿನಾಯಿತಿಯನ್ನು ಹೆಚ್ಚಿಗೆ ಮಾಡಬೇಕು. ಆದರೆ ಹಣಕಾಸು ಸ್ಥಿತಿ ದೊಡ್ಡ ಸವಾಲಾಗಿದೆ ಎಂದು ತಿಳಿಸಿದರು.
ಕಪ್ಪು ಹಣದ ಬೆಗ್ಗೆ ಮಾತನಾಡಿದ ಅವರು, ಇದು ದೊಡ್ಡ ಪ್ರಮಾಣದಲ್ಲಿದೆ ಆದರೆ ಸುಲಭವಾಗಿ ಪತ್ತೆ ಹಚ್ಚಬಲ್ಲದ್ದಾಗಿದೆ. ಏಕೆಂದರೆ ರಿಯಲ್ ಎಸ್ಟೇಟ್, ಜಮೀನು, ಗಣಿಗೆಗಾರಿಕೆಗೆ, ಒಡವೆಗೆ, ವಿಲಾಸಿ ವಸ್ತುಗಳಿಗೆ ಹೀಗೆ ಎಲ್ಲ ಕಡೆಯೂ ಕಪ್ಪು ಹಣ ಕಾಣಸಿಗುತ್ತದೆ. ಶೈಕ್ಷಣಿಕ ಸಂಸ್ಥೆಗಳಲ್ಲಿಯೂ ಸಿಗುತ್ತದೆ. ಕೊಳ್ಳುವವರನ್ನು ಕಂಡು ಹಿಡಿದರೆ ಸಾಕು, ಕಪ್ಪು ಹಣ ಸ್ವೀಕರಿಸುವವರನ್ನೂ ಪತ್ತೆ ಹಚ್ಚಬಹುದು್ ಎಂದರು.