Untitled Document
Sign Up | Login    
Dynamic website and Portals
  
January 6, 2015

ಬಜೆಟ್ ಅನುದಾನ ಸಮಾನವಾಗಿ ಬಳಸಿ: ಪ್ರಧಾನಿ ಮೋದಿ

ಪ್ರಧಾನ ಮಂತ್ರಿ ನರೇಂದ್ರ ಮೋದಿ ಪ್ರಧಾನ ಮಂತ್ರಿ ನರೇಂದ್ರ ಮೋದಿ

ನವದೆಹಲಿ : ಪ್ರತಿ ಸಚಿವಾಲಯ ಕೂಡ ಬಜೆಟ್‌ನಲ್ಲಿ ನೀಡಲಾಗುವು ಅನುದಾನವನ್ನು ವರ್ಷಪೂರ್ತಿ ಸಮಾನವಾಗಿ ಬಳಿಸಿಕೊಳ್ಳಬೇಕು. ರ್ಷದ ಕೊನೆಗೆ ಎಚ್ಚೆತ್ತು ತರಾತುರಿಯಿಂದ ಹಣವನ್ನು ವ್ಯಯಿಸುವುದು ಸರಿಯಲ್ಲ ಎಂದು ಪ್ರಧಾನಿ ನರೇಂದ್ರ ಮೋದಿ ತಮ್ಮ ಸಚಿವರಿಗೆ ಖಡಕ್ ಎಚ್ಚರಿಕೆ ನೀಡಿದ್ದಾರೆ.

ಬಜೆಟ್ ಅಧಿವೇಶನಕ್ಕೆ ಒಂದು ತಿಂಗಳು ಬಾಕಿಯಿರುವಾಗಲೇ ತಮ್ಮ ಅಧಿಕೃತ ನಿವಾಸದಲ್ಲಿ ಪ್ರಧಾನಿ ಮೋದಿ ಅವರು ಸಂಪುಟ ಸಚಿವರು ಮತ್ತು ಸಹಾಯಕ ಸಚಿವರ ಸಭೆ ನಡೆಸಿದರು.

ಈ ವೇಳೆ ಮಾತನಾಡಿದ ಅವರು, ಎಲೆಕ್ಟ್ರಾನಿಕ್ ಮಾಧ್ಯಮಗಳ ಮೂಲಕ, ವೆಬ್ ಪೋರ್ಟ್‌ಲ್‌ಗಳ ಮೂಲಕ ಬಜೆಟ್ ಬಗ್ಗೆ ಜನಸಾಮಾನ್ಯರ ಅಭಿಪ್ರಾಯವನ್ನೂ ಕೇಳುವ ಮೂಲಕ ಅವರನ್ನೂ ಬಜೆಟ್‌ನಲ್ಲಿ ಪಾಸ್ಗೊಳ್ಳುವಂತೆ ಮಾಡಿ ಎಂದು ಸೂಚಿಸಿದರು.

ಈ ರೀತಿ ಜನಸಾಮಾನ್ಯರನ್ನು ಗಣನೆಗೆ ತೆಗೆದುಕೊಂಡ ಕಾರಣದಿಂದಲೇ ಸ್ವಚ್ಛ ಭಾರತ ಅಭಿಯಾನವು ಯಶಸ್ವಿಯಾಯಿತು ಎಂದೂ ತಿಳಿಸಿದರು.

ಇದೇ ಸಂದರ್ಭದಲ್ಲಿ ವಿವಿಧ ಸಚಿವಾಲಯಗಳು ಈಗಾಗಲೇ ಸಿದ್ಧಪಡಿಸಿರುವ ಇ-ಬುಕ್‌ಗಳನ್ನು ಪ್ರದರ್ಶಿಸಿದ ಪ್ರಧಾನಿ, ಇಂತಹುದರ ಮೂಲಕವೇ ಸರ್ಕಾರವು ಪಾರದರ್ಶಕತೆಯ ಗುರಿಯನ್ನು ತಲುಪಲು ಸಾಧ್ಯ ಎಂದರು.

 

 

Share this page : 
 

Readers' Comments (0)
Select Language : 
Press F12 to toggle Indian language and English
Your Name : 
Characters Remaining: 5000
 
 
The Ultimate Job Portal
Netzume - Resume Website Gou Products

Other News

Home | Opinion | Sports | Business | Education | Health | Life & Style| Entertainment | Science &Technology | Art & Culture | Terms of Use |
© bangalorewaves. All rights reserved. Developed And Managed by Rishi Systems P. Limited