ಜೈಪುರ : ಪ್ರಧಾನಿ ನರೇಂದ್ರ ಮೋದಿ ಅಜ್ಮೀರ್ ನಲ್ಲಿರುವ ಸೂಫಿ ಸಂತ ಖ್ವಾಜಾ ಮೊಯಿನುದ್ದೀನ್ ಚಿಸ್ತಿ ದರ್ಗಾಗೆ ಏ.22ರಂದು ಚಾದರ್ ಅರ್ಪಿಸಿದ್ದಾರೆ. ಮೋದಿ ಪರವಾಗಿ ಅಜ್ಮೀರ್ ದರ್ಗಾಗೆ ತೆರಳಲಿರುವ ಕೇಂದ್ರ ಸಚಿವ ಮುಕ್ತಾರ್ ಅಬ್ಬಾಸ್ ನಖ್ವಿ, ಚಾದರ್ ನ್ನು ತಲುಪಿಸಿದ್ದಾರೆ.
ಅಜ್ಮೀರ್ ನಲ್ಲಿ ಏ.21ರಿಂದ ಸೂಫಿ ಸಂತರ 803ನೇ ಉರೂಸ್ ಆಚರಣೆ ಆರಂಭವಾಗಿದೆ. ಈ ಹಿನ್ನೆಲೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರ ಪರವಾಗಿ ನಾನು ಚಾದರ್ ನ್ನು ಸಮರ್ಪಿಸಿದ್ದೇನೆ, ಪ್ರಧಾನಿ ತಮ್ಮ ಸಂದೇಶದಲ್ಲಿ ದೇಶಕ್ಕೆ ಒಳಿತಾಗಲಿ ಎಂದು ಪ್ರಾರ್ಥಿಸಿರುವುದಾಗಿ ಕೇಂದ್ರ ಸಚಿವ ನಖ್ವಿ ಮಾಧ್ಯಮಗಳಿಗೆ ತಿಳಿಸಿದ್ದಾರೆ.
ಪ್ರಧಾನಿ ನರೇಂದ್ರ ಮೋದಿ ಸಂಪುಟದಲ್ಲಿ ಅಲ್ಪಸಂಖ್ಯಾತ ಖಾತೆ ಸಚಿವರಾಗಿರುವ ನಖ್ವಿ, ರಾಜಸ್ಥಾನಕ್ಕೆ ತೆರಳಿರುವ ಹಿನ್ನೆಲೆಯಲ್ಲಿ ಮಸೀದಿಗೆ ಬಿಗಿ ಭದ್ರತೆ ಒದಗಿಸಲಾಗಿದೆ.