ನವದೆಹಲಿ : ಭಾರತಕ್ಕೆ 3 ದಿನಗಳ ಭೇಟಿ ನೀಡುತ್ತಿರುವ ಶ್ರೀಲಂಕಾದ ನೂತನ ಪ್ರಧಾನಿ ರಣಿಲ್ ವಿಕ್ರಮಸಿಂಘೆ ಹಾಗೂ ಪ್ರಧಾನಿ ನರೇಂದ್ರ ಮೋದಿ ಮಂಗಳವಾರ ದೆಹಲಿಯಲ್ಲಿ ನಡೆದ ದ್ವಿಪಕ್ಷೀಯ ಮಾತುಕತೆ ನಂತರ ಜಂಟಿ ಹೇಳಿಕೆ ನೀಡಿದರು.
ಈ ಸಂದರ್ಭದಲ್ಲಿ ಮಾತನಾಡಿದ ಪ್ರಧಾನಿ ಮೋದಿ, 'ತಮ್ಮ ಪ್ರಥಮ (ಶ್ರೀಲಂಕಾದ ಪ್ರಧಾನಿಯಾಗಿ) ವಿದೇಶ ಪ್ರವಾಸಕ್ಕೆ ಭಾರತವನ್ನು ಆಯ್ಕೆ ಮಾಡಿರುವುದು ನಮಗೆ ಅತ್ಯಂತ ಗೌರವದ ವಿಷಯ' ಎಂದು ಹೇಳಿದರು.
ಇದಕ್ಕೂ ಮೊದಲು ಇಬ್ಬರೂ ಪ್ರಧಾನಿಗಳ ಸಮ್ಮುಖದಲ್ಲಿ ಉಭಯ ದೇಶಗಳ ಮಧ್ಯೆ ಹಲವಾರು ಒಪ್ಪಂದಗಳಿಗೆ ಸಹಿ ಹಾಕಲಾಯಿತು.
ಜಂಟಿ ಹೇಳಿಕೆಯ ಮುಖ್ಯಾಂಶಗಳು :
1. ಭಾರತ-ಶ್ರೀಲಂಕಾಗಳ ನಡುವಿನ ಸಂಬಂಧದಲ್ಲಿ ನೀವಿಟ್ಟಿರುವ ನಂಬಿಕೆ ಹಾಗೂ ಬೆಂಬಲಕ್ಕೆ ನಿಮಗೆ ಧನ್ಯವಾದಗಳು - ಪ್ರಧಾನಿ ನರೇಂದ್ರ ಮೋದಿ
2. ಅಭಿವೃದ್ಧಿ ಉಭಯ ದೇಶಗಳಿಗೂ ಪ್ರಾಮುಖ್ಯವಾಗಿದ್ದು, ಇಂದು ಸಮಾನ ಅಭಿವೃದ್ಧಿಗಳ ಕಾರ್ಯಗಳ ಬಗ್ಗೆ ನಾನು ಪ್ರಧಾನಿ (ವಿಕ್ರಮಸಿಂಘೆ) ಜೊತೆ ವಿಸ್ತೃತ ಮಾತುಕತೆ ನಡೆಸಿದ್ದೇನೆ - ಪ್ರಧಾನಿ ಮೋದಿ
3. ಶ್ರೀಲಂಕಾದೊಂದಿಗೆ ನಮ್ಮ ವಾಣಿಜ್ಯ ವ್ಯವಹಾರ ಇನ್ನಷ್ಟು ಪ್ರಗತಿ ಹೊಂದಬೇಕು ಹಾಗೂ ಸುಢೃಢವಾಗಬೇಕೆಂದು ನಾವು ಬಯಸುತ್ತೇವೆ. ಶ್ರೀಲಂಕಾದ ಅಭಿವೃದ್ಧಿ ಈ ವಲಯದ ಸ್ಥಿರತೆಗೆ ಅವಶ್ಯಕವಾಗಿದೆ - ಪ್ರಧಾನಿ ಮೋದಿ
4. ಈ ಬಾರಿ ಶ್ರೀಲಂಕಾ (ಜನತೆ) ಬದಲಾವಣೆ, ಪರಿವರ್ತನೆ ಹಾಗೂ ಪ್ರಗತಿಗಾಗಿ ಬುದ್ಧಿವಂತಿಕೆಯಿಂದ ಮತದಾನ ಮಾಡಿದ್ದಾರೆ - ನರೇಂದ್ರ ಮೋದಿ
5. (ಶ್ರೀಲಂಕಾದ) ಅಭಿವೃದ್ಧಿಯಲ್ಲಿ ಸಹಭಾಗಿಯಾಗಲು ನಮ್ಮ ಬದ್ಧತೆ ಸದಾ ಇರುತ್ತದೆ ಎಂದು ನಾನು ಶ್ರೀಲಂಕಾ ಪ್ರಧಾನಿ ವಿಕ್ರಮಸಿಂಘೆ ಅವರಿಗೆ ಭರವಸೆ ಕೊಡುತ್ತೇನೆ - ಪ್ರಧಾನಿ ಮೋದಿ
6. ಇತ್ತೀಚೆಗೆ ತಾನೆ ರೋಮಾಂಚಕ ಟೆಸ್ಟ್ ಸರಣಿಯನ್ನು ಮುಗಿಸಿದ್ದೇವೆ. ಕ್ರಿಕೆಟ್ ಅಂಗಳದಲ್ಲಿ ಶ್ರೇಷ್ಠ ಕ್ರಿಕೆಟಿಗ ಕುಮಾರ ಸಂಗಕ್ಕಾರ ಅವರನ್ನು ನಾವೆಲ್ಲರೂ ಸದಾ ನೆನಪಿಸಿಕೊೞುತ್ತೇವೆ - ಪ್ರಧಾನಿ ನರೇಂದ್ರ ಮೋದಿ
7. ಇದೊಂದು ಉಭಯ ದೇಶಗಳ ಜನರ ಹೃದಯಗಳನ್ನು ಸ್ಪಂದಿಸುವ ಸಂಬಂಧ - ಪ್ರಧಾನಿ ಮೋದಿ
8. ಉಭಯ ದೇಶಗಳ ನಡುವಿನ ಮೀನುಗಾರರ ಸಮಸ್ಯೆಗಳ ಬಗ್ಗೆ ನಾನು ಹಾಗೂ ಶ್ರೀಲಂಕಾ ಪ್ರಧಾನಿ ಮಾತುಕತೆ ನಡೆಸಿದ್ದೇವೆ ಹಾಗೂ ಈ ಬಗ್ಗೆ ಸರಿಯಾದ ಪರಿಹಾರ ಕಂಡುಕೊಳ್ಲಲು ಎರಡೂ ದೇಶಗಳ ಮೀನುಗಾರರ ಸಂಘಟನೆಗಳು ಪ್ರಯತ್ನಿಸಬೇಕು ಎಂದು ನಿರ್ಧರಿಸಿದ್ದೇವೆ - ಪ್ರಧಾನಿ ಮೋದಿ
9. ಇದನ್ನು ಮಾನವೀಯತೆ ಹಾಗೂ ಜೀವನೋಪಾಯ ಮಾರ್ಗವೆಂಬ ದೃಷ್ಠಿಯಿಂದ ನೋಡಬೇಕು ಎಂದು ನಾನು ಶ್ರೀಲಂಕಾ ಪ್ರಧಾನಿಗೆ ತಿಳಿಸಿದ್ದೇನೆ - ಪ್ರಧಾನಿ ಮೋದಿ