ನವದೆಹಲಿ : ಬುಧವಾರ ಪ್ರಧಾನಿ ನರೇಂದ್ರ ಮೋದಿ ಅವರು ರಾಜ್ಯಸಭೆಯಲ್ಲಿ ಮಾತನಾಡಿದರು. ಪ್ರಧಾನಿ ನರೇಂದ್ರ ಮೋದಿ ಅವರ ಭಾಷಣದ ಪ್ರಮುಖಾಂಶ ಈ ಕೆಳಗಿದೆ.
* ಸ್ವಚ್ಛತೆ ಬಡವರಿಗೆ ಹೆಚ್ಚು ಸಹಾಯವಾಗುತ್ತದೆ. ಸ್ವಚ್ಛತೆ ಇಲ್ಲದಿರುವುದರಿಂದ ಬಡವರು ಔಷಧಿಗಾಗಿ ಹೆಚ್ಚು ಹಣ ಖರ್ಚು ಮಾಡಬೆಕಾಗುತ್ತದೆ.
* ಸ್ವಚ್ಛತೆ ಒಂದು ಸಾಮೂಹಿಕ ಆಂದೋಲನದವಾಗಿದೆ. ಇದೇ ಮೊದಲ ಬಾರಿಗೆ ಸಂಸತ್ತಿನಲ್ಲಿ ಈ ಕುರಿತು ಚರ್ಚೆಯಾಯಿತು. ಈ ಚರ್ಚೆಯಲ್ಲಿ ಸರ್ಕಾರವನ್ನು ಟೀಕಿಸಲಾಗಿದೆ, ಆದರೆ ಸಮಸ್ಯೆಯ ಚರ್ಚಿಯಾಗಿದ್ದು ಒಳ್ಳೆಯದು.
* ನಾನು ಮನಮೋಹನ ಸಿಂಗ್ ಅವರಂತೆ ಅರ್ಥಶಾಸ್ತ್ರಜ್ಞ ಅಲ್ಲ, ಆದ್ದರಿಂದ ನನಗೆ ಅಷ್ಟು ತಿಳುವಳಿಕೆ ಇಲ್ಲ. ಆದರೆ ನನಗೆ ಕೆಲವು ವಿಷಯಗಳು ಗೊತ್ತು ಎಂದು ಕೇಂದ್ರ ಬಜೆಟ್ ನಲ್ಲಿ ರೈತರ ಆದಾಯವನ್ನು ಮುಂದಿನ ೫ ವರ್ಷಗಳಲ್ಲಿ ಎರಡರಷ್ಟು ಮಾಡುವ ಕುರಿತು ಈ ಮಾತನಾಡುತ್ತ, ಪ್ರಧಾನಿ ನರೇಂದ್ರ ಮೋದಿ ಹೇಳಿದರು.
* ಸಬ್ಸಿಡಿ ಅರ್ಹರಿಗೆ ಮಾತ್ರ ಸಿಗುತ್ತದೆ ಎಂಬ ಖಾತರಿ ಸರ್ಕಾರಕ್ಕಿದೆ. ಇದು ಹಣ ಉಳಿತಾಯ ಮಾಡಲು ಅಲ್ಲ.
* ಪ್ರಪಂಚದಲ್ಲಿ ಎರಡು ರೀತಿಯ ಜನರಿದ್ದಾರೆ. ಒಂದು ಕೆಲಸ ಮಾಡುವವರು, ಇನ್ನೊಂದು ಕ್ರೆಡಿಟ್ ತೆಗೆದುಕೊಳ್ಳುವವರು. ಮೊದಲನೆಯದಕ್ಕೆ ಕಡಿಮೆ ಸ್ಪರ್ಧೆ ಇದೆ ಎಂದು ಇಂದಿರಾ ಗಾಂಧಿ ಅವರು ಹೇಳಿದ್ದರು ಎಂದು ಹೇಳಿ, ಕಾಂಗ್ರೆಸ್ ಗೆ ಚುಚ್ಚಿದರು.
* ನಾನು ಕಾಂಗ್ರೆಸ್ ಮುಖಂಡ ಗುಲಾಬ್ ನಬೀ ಆಜಾದ್ ಅವರಿಗೆ ಕೃತಜ್ಞನಾಗಿದ್ದೇನೆ. ಅವರು ಧನ್ ಜನ್ ಯೋಜನೆಯಲ್ಲಿ ಖತೆಯಿಲ್ಲದವರ ಪಟ್ಟಿ ತಂದಿದ್ದಾರೆ. ಅವರು ಮೈಕ್ರೋಸ್ಕೋಪ್ ಹಿಡಿದು ಕೆಲಸ ಮಾಡಿದಂತಿದೆ. ಇದೇ ಕಾಂಗ್ರೆಸ್ ಅಧಿಕಾರಿದಲ್ಲಿದ್ದಾಗ ಬೈನಾಕ್ಯುಲರ್ ಹಿಡಿದು ಕೆಲಸ ಮಾಡಿದ್ದರೆ ಒಳ್ಳೆಯದಾಗುತ್ತಿತ್ತು.
* ನಾವು ಹೊಣೆಗಾರಿಕೆಗೆ ಹೆಚ್ಚು ಗಮನಕೊಡುತ್ತೇವೆ. ಕೆಲವು ದಶಕಗಳಿಂದ ಸ್ಥಗಿತಗೊಂಡಿದ್ದ ಮೂಲಸೌಕರ್ಯ ಯೋಜನೆಗಳನ್ನು ನಾನು ಪುನರ್ ಪರಿಶೀಲನೆ ಮಾಡುತ್ತಿದ್ದೇನೆ.
* ನಾವು ನೀತಿ ಚಾಲಿತ ಆಡಳಿತಕ್ಕೆ ಮತ್ತು ಪಾರದರ್ಶಕತೆಗೆ ಪ್ರಾಮುಖ್ಯತೆಯನ್ನು ನೀಡುತ್ತೇವೆ.
* ಸಂಸತ್ತಿನಲ್ಲಿ ಅನೇಕ ಬಿಲ್ ಗಳು ಬಾಕಿ ಇವೆ. ನಾವು ಸಾಧ್ಯವಾದಷ್ಟು ಬೇಗ ಆ ಬಿಲ್ಲುಗಳನ್ನು ಅಂಗೀಕರಿಸಿ ಭಾರತದ ಪ್ರಗತಿಗೆ ಪ್ರಚೋದನೆ ನೀಡೋಣ.
* ಸಾವಿನ ಬಗ್ಗೆ ಕೆಲವು ತಮಾಷೆಯ ವಿಷಯಗಳಿವೆ. ಯಾರೂ ಸಾವನ್ನು ಹಳಿಯುವುದಿಲ್ಲ. ಎಲ್ಲರೂ ಮನುಷ್ಯ ಏಕೆ ಸಾಯುತ್ತಾನೆ ಎಂದು ಹೇಳುತ್ತಾರೆ. ನನಗೆ ಕೆಲವು ಸಲ ಕಾಂಗ್ರೆಸ್ ಈ ತರ್ಕದ ಫಲಾನುಭವಿ ಎಂದೆನಿಸುತ್ತದೆ. ನಾವು ಕಾಂಗ್ರೆಸ್ ಅನ್ನು ಟೀಕಿಸಿದರೆ ವಿರೋಧ ಪಕ್ಷದವರ ಟೀಕೆ ಎಂದಾಗುತ್ತದೆ. ಕಾಂಗ್ರೆಸ್ ಗೆ ಎಂದೂ ಕೆಟ್ಟ ಹೆಸರು ಬರುವುದಿಲ್ಲ.
ಪ್ರಧಾನಿ ನರೇಂದ್ರ ಮೋದಿ ಅವರು ಕೊನೆಯಲ್ಲಿ 'ಸಫರ್ ಮೆ ಧೋಪ್ ತೊ ಹೋಗಿ', ಎಂಬ ನಿದಾ ಫಜ್ಲಿ ಅವರ ಕವಿತೆಯನ್ನು ಹೇಳಿ ತಮ್ಮ ಭಾಷಣ ಮುಗಿಸಿದರು.