ಏಪ್ರಿಲ್ 1ರಿಂದ ಆರಂಭವಾಗಲಿರುವ 2016-17ನೇ ಸಾಲಿನ ಹಣಕಾಸು ವರ್ಷದಲ್ಲಿ ಭಾರತದಲ್ಲಿ ಒಟ್ಟು ರಾಷ್ಟ್ರೀಯ ಜಿಡಿಪಿ ಶೇಕಡಾ 7ರಿಂದ 7.5ರಷ್ಟು ಬೆಳವಣಿಗೆಯಾಗಲಿದೆ ಎಂದು ಸಂಸತ್ತಿನಲ್ಲಿ ಶುಕ್ರವಾರ ಮಂಡಿಸಲಾಗಿರುವ ಆರ್ಥಿಕ ಸಮೀಕ್ಷೆಯು ಹೇಳಿದೆ.
ಕೇಂದ್ರ ಹಣಕಾಸು ಸಚಿವ ಅರುಣ್ ಜೇಟ್ಲಿ ಅವರು ಸೋಮವಾರ 2016-17ರ...
ಕಳೆದ ವರ್ಷ ಬಿಜೆಪಿ ನೇತೃತ್ವದ ಸರ್ಕಾರ ಅಧಿಕಾರಕ್ಕೆ ಬಂದ ನಂತರ ಭಾರತದ ಆರ್ಥಿಕತೆ ಉತ್ತಮ ರೀತಿಯಲ್ಲಿ ಅಭಿವೃದ್ಧಿ ಹೊಂದುತ್ತಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಶುಕ್ರವಾರ ಪ್ರತಿಪಾದಿಸಿದರು. ಆರ್ಥಿಕ ಪರಿವರ್ತನೆಯ ಕೆಲಸ ಮ್ಯಾರಥಾನ್ ನ ಹಾಗೆ ಎಂದು ವಿವರಿಸಿದರು.
ಎಲ್ಲಾ ಆರ್ಥಿಕ ಸೂಚಕಗಳ...
ಕಳೆದ ಒಂಭತ್ತು ತಿಂಗಳುಗಳಿಂದ ಸತತವಾಗಿ ಕೆಳಗಿಳಿಯುತ್ತಿರುವ ಹಣದುಬ್ಬರ ಜುಲೈ ತಿಂಗಳಲ್ಲಿ ಐತಿಹಾಸಿಕ ಕೆಳಮಟ್ಟವನ್ನು ತಲುಪಿದ್ದು, ಭಾರತೀಯ ರಿಸರ್ವ್ ಬ್ಯಾಂಕ್ (ಆರ್.ಬಿ.ಐ) ಸದ್ಯದಲ್ಲೇ ಬಡ್ಡಿ ದರವನ್ನು ಇಳಿಸುವ ಬಗ್ಗೆ ನಿರ್ಧಾರ ಕೈಗೊೞಬಹುದು ಎಂಬ ನಿರೀಕ್ಷೆ ಗರಿಗೆದರಿದೆ.
ತರಕಾರಿ ಮತ್ತು ಇಂಧನದ ಬೆಲೆ ಸತತವಾಗಿ...
ಭಾರತ ಪ್ರವಾಸ ಕೈಗೊಂಡಿರುವ ಅಂತರರಾಷ್ಟ್ರೀಯ ಹಣಕಾಸು ನಿಧಿ(ಐಎಂಎಫ್)ಮುಖ್ಯಸ್ಥೆ ಕ್ರಿಸ್ಟೀನ್ ಲಾಗರ್ಡ್, ಭಾರತವನ್ನು ಜಾಗತಿಕ ಆರ್ಥಿಕತೆ ಬೆಳವಣಿಗೆಗೆ ಸಹಕಾರಿಯಾಗಲಿರುವ ಉಜ್ವಲ ತಾಣವೆಂದು ಬಣ್ಣಿಸಿದ್ದಾರೆ.
ನರೇಂದ್ರ ಮೋದಿ ಅವರನ್ನು ಭೇಟಿ ಮಾಡುವುದಕ್ಕೂ ಮುನ್ನ ಮಾತನಾಡಿದ ಕ್ರಿಸ್ಟೀನ್ ಲಾಗರ್ಡ್, ಭಾರತದ ಆರ್ಥಿಕತೆ ಶೇ.7ಕ್ಕಿಂತಲೂ ಹೆಚ್ಚಿದ್ದು, ಮುಂದಿನ...
ಕಳೆದ ಸಂಕ್ರಾಂತಿ ಹಬ್ಬದಂದು ರೆಪೋ ದರವನ್ನು ಕಡಿತಗೊಳಿಸಿದ್ದ ಭಾರತೀಯ ರಿಸರ್ವ್ ಬ್ಯಾಂಕ್ ಮತ್ತೊಮ್ಮೆ ರೆಪೋ ದರ ಕಡಿತಗೊಳಿಸಿದೆ.
ಭಾರತೀಯ ರಿಸರ್ವ್ ಬ್ಯಾಂಕ್ ತನ್ನ ರೆಪೋ ದರವನ್ನ ಮತ್ತೆ ಶೇ.0.25ರಷ್ಟು ಕಡಿಮೆ ಮಾಡಿದೆ. ಈವರೆಗೆ ರೆಪೋ ದರ ಶೇ.7.75 ಇತ್ತು. ಇದೀಗ ಶೇ.7.50ಕ್ಕೆ ಇಳಿಸಿದೆ....
'ಹಣಕಾಸು ಬಜೆಟ್' ಗೂ ಮುನ್ನ ಕೇಂದ್ರ ಹಣಕಾಸು ಸಚಿವ ಅರುಣ್ ಜೇಟ್ಲಿ ಅವರು ಲೋಕಸಭೆಯಲ್ಲಿ ಪೂರ್ವಭಾವಿ ಆರ್ಥಿಕ ಸಮೀಕ್ಷೆಯನ್ನು ಮಂಡಿಸಿದ್ದಾರೆ. ಸಮೀಕ್ಷೆ ಪ್ರಕಾರ 2015-16ನೇ ಸಾಲಿನಲ್ಲಿ ಶೇ.8ಕ್ಕಿಂತ ಹೆಚ್ಚು ಜಿಡಿಪಿ ಬೆಳವಣಿಗೆಯಾಗಲಿದೆ ಎಂದು ತಿಳಿಸಿದ್ದಾರೆ.
ಹಣದುಬ್ಬರ ದರ...
ಆಹಾರ ವಸ್ತುಗಳ ಬೆಲೆ ಹೆಚ್ಚಿದ್ದರೂ ಸಗಟು ಹಣದುಬ್ಬರ ಮೂರು ತಿಂಗಳ ಅವಧಿಯಲ್ಲಿ ಎರಡನೇ ಬಾರಿಗೆ ಶೂನ್ಯಕ್ಕಿಂತ ಕೆಳಕ್ಕೆ ಕುಸಿದಿದ್ದು, ಜನವರಿಯಲ್ಲಿ ಮೈನಸ್ ಶೇ.0.39ಕ್ಕೆ ಇಳಿಕೆ ಕಂಡಿದೆ.
ಹಣದುಬ್ಬರ ಇಷ್ಟೊಂದು ಕನಿಷ್ಠ ಮಟ್ಟಕ್ಕೆ ಕುಸಿಯುತ್ತಿರುವುದು ಐದೂವರೆ ವರ್ಷಗಳಲ್ಲಿ ಇದೇ ಮೊದಲು. ಉತ್ಪಾದಿತ ಸರಕು...
'ಹಣದುಬ್ಬರ' ದರ ನವೆಂಬರ್ ತಿಂಗಳಲ್ಲಿ ಶೇ.0 ದಾಖಲಾಗಿದ್ದು ನರೇಂದ್ರ ಮೋದಿ ಭರವಸೆಯ ಅಚ್ಚೆ ದಿನಗಳು ನನಸಾಗಿದೆ ಎಂದು ಹೇಳಬಹುದಾಗಿದೆ.
ಎನ್.ಡಿ.ಎ ಸರ್ಕಾರ ಅಸ್ಥಿತ್ವಕ್ಕೆ ಬಂದ ನಂತರ ಸತತವಾಗಿ ಹಣದುಬ್ಬರ ದರ ಇಳಿಕೆಯಾಗುತ್ತಿದ್ದು ದೇಶದಲ್ಲಿ ಆಹಾರ, ಇಂಧನ ಮತ್ತು ಮಾನವ ಉತ್ಪಾದಿತ ವಸ್ತುಗಳ...
ರೆಪೋ ದರವನ್ನು ಆರ್ಬಿಐ ಬದಲಾಯಿಸುವ ಸಾಧ್ಯತೆ ಇದೆ ಎಂಬ ಎಲ್ಲಾ ಉಹಾಪೋಹಗಳಿಗೆ ತೆರೆ ಎಳೆದಿರುವ ಆರ್ಬಿಐ ಗವರ್ನರ್ ರಘುರಾಂ ರಾಜನ್ ಸದ್ಯದ ರೆಪೋ ದರವನ್ನು ಯಥಾಸ್ಥಿತಿಯಲ್ಲಿ ಕಾಯ್ದುಕೊಂಡಿದ್ದಾರೆ.
ಬಡ್ಡಿ ದರದಲ್ಲಿ ಯಾವುದೇ ಬದಲಾವಣೆ ಇಲ್ಲ ಎಂದು ಆರ್ಬಿಐ ಘೋಷಿಸಿದ್ದು, ಆರ್ಬಿಐ ಹಣದುಬ್ಬರವನ್ನು ನಿಯಂತ್ರಿಸಲು...
ಕಳೆದ 5 ವರ್ಷಗಳಲ್ಲಿ ಇದೇ ಮೊದಲ ಬಾರಿಗೆ ದೇಶದ ಸಗಟು ಮಾರಾಟ ಹಣದುಬ್ಬರ ಶೇ.2.38ಕ್ಕೆ ಇಳಿದಿದ್ದು ಜನಸಾಮಾನ್ಯರು ಕಳೆದ ಕೆಲವು ತಿಂಗಳಿನಿಂದ ಎದುರು ನೋಡುತ್ತಿದ್ದ ಪ್ರಧಾನಿ ನರೇಂದ್ರ ಮೋದಿ ಭರವಸೆಯ ಅಚ್ಚೆ ದಿನ್ ಕನಸು ಕೊನೆಗೂ ನನಸಾಗಿದೆ.
ಹಣದುಬ್ಬರ...
'ತರಕಾರಿಗಳ ಬೆಲೆ' ಇಳಿಕೆಯಾಗಿರುವುದರಿಂದ ಆಗಸ್ಟ್ ತಿಂಗಳಿನಲ್ಲಿ ಹಣದುಬ್ಬರ ದರ ಶೇ.3.74ಕ್ಕೆ ಕುಸಿದಿದೆ. ಕಳೆದ ಐದು ವರ್ಷದಲ್ಲಿ ಇದೇ ಮೊದಲ ಬಾರಿಗೆ ಅತಿ ಹೆಚ್ಚು ಪ್ರಮಾಣದಲ್ಲಿ ಹಣದುಬ್ಬರ ದರ ಇಳಿಕೆಯಾಗಿದೆ.
2009ರ ಅಕ್ಟೋಬರ್ ನಲ್ಲಿ ಹಣದುಬ್ಬರ ಪ್ರಮಾಣ ಶೇ.1.8ಕ್ಕೆ ಕುಸಿದಿತ್ತು. ಇದನ್ನು ಹೊರತುಪಡಿಸಿದರೆ...
'ಡೀಸೆಲ್ ಬೆಲೆ' ನಿಯಂತ್ರಣ ರದ್ದುಗೊಳಿಸಲು ಇದೇ ಸೂಕ್ತ ಸಮಯ ಎಂದು ಆರ್.ಬಿ.ಐ ಗವರ್ನರ್ ಕೇಂದ್ರ ಸರ್ಕಾರಕ್ಕೆ ಸಲಹೆ ನೀಡಿದ್ದಾರೆ.
ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ತೈಲ ಉತ್ಪನ್ನಗಳ ಬೆಲೆ ಇಳಿಕೆಯಾಗುತ್ತಿದ್ದು ಡೀಸೆಲ್ ಬೆಲೆಯನ್ನು ನಿಯಂತ್ರಣ ಮುಕ್ತಗೊಳಿಸಲು ಉತ್ತಮ ಅವಕಾಶ ದೊರೆತಿದೆ ಎಂದು ರಘುರಾಮ್ ರಾಜನ್...